ಜಾದವ್‌ಪುರ ವಿಶ್ವವಿದ್ಯಾಲಯ ವು (ಜಾದವ್‌ಪುರ್‌ ಯೂನಿವರ್ಸಿಟಿ- ) (ಬಂಗಾಳಿ:যাদবপুর বিশ্ববিদ্যালয়) ಭಾರತದಲ್ಲಿನ ಒಂದು ಶೈಕ್ಷಣಿಕ ಹಾಗೂ ಸಂಶೋಧನಾ ಸಂಸ್ಥೆಯಾಗಿದೆ. ಇದು ಪಶ್ಚಿಮ ಬಂಗಾಳದ ಕೋಲ್ಕತಾದಲ್ಲಿ ನೆಲೆಗೊಂಡಿದ್ದು, ಎರಡು ಶೈಕ್ಷಣಿಕ ಆವರಣಗಳನ್ನು (ಕ್ಯಾಂಪಸ್‌ಗಳನ್ನು) ಒಳಗೊಂಡಿದೆ. ಮುಖ್ಯ ಶೈಕ್ಷಣಿಕ ಆವರಣವು ಜಾದವ್‌ಪುರ‌ದಲ್ಲಿದ್ದರೆ, ಹೊಸ ಶೈಕ್ಷಣಿಕ ಆವರಣವು ಸಾಲ್ಟ್‌ ಲೇಕ್‌‌ನಲ್ಲಿದೆ. ಇಂಡಿಯನ್‌ ಅಸೋಸಿಯೇಷನ್‌ ಫಾರ್‌ ದಿ ಕಲ್ಟಿವೇಷನ್‌ ಆಫ್‌ ಸೈನ್ಸ್‌, ಇಂಡಿಯನ್‌ ಅಸೋಸಿಯೇಷನ್‌ ಆಫ್‌ ಕೆಮಿಕಲ್‌ ಬಯಾಲಜಿ ಹಾಗೂ ಸೆಂಟ್ರಲ್‌ ಗ್ಲಾಸ್‌ ಅಂಡ್‌ ಸೆರಾಮಿಕ್‌ ರಿಸರ್ಚ್‌ ಇನ್‌ಸ್ಟಿಟ್ಯೂಟ್‌‌‌‌ನಂಥ ಅಗ್ರಗಣ್ಯ ಸಂಶೋಧನೆ ಸಂಸ್ಥೆಗಳೊಂದಿಗೂ ಸಹ ಜಾದವ್‌ಪುರ ವಿಶ್ವವಿದ್ಯಾಲಯವು ನಿಕಟವಾದ ಸಂಬಂಧವನ್ನು ಹೊಂದಿದೆ. ಭಾರತದಲ್ಲಿನ ಅಗ್ರಗಣ್ಯ ಎಂಜಿನಿಯರಿಂಗ್‌ ಶಿಕ್ಷಣ ಸಂಸ್ಥೆಗಳಲ್ಲಿ ಒಂದೆಂದು ಇದು ಪರಿಗಣಿಸಲ್ಪಟ್ಟಿದೆ. ವಿಶ್ವವಿದ್ಯಾಲಯ ಧನಸಹಾಯ ಆಯೋಗವು ಇದನ್ನು "ಉತ್ಕೃಷ್ಟತೆಗೆ ಸಂಬಂಧಿಸಿದ ಸಾಮರ್ಥ್ಯವನ್ನು ಹೊಂದಿರುವ" ದೇಶದಲ್ಲಿನ ವಿಶ್ವವಿದ್ಯಾಲಯಗಳ ಪೈಕಿ ಒಂದೆಂದು ಗುರುತಿಸಿದೆ. ಇದರ ಜೊತೆಗೆ, ಜಾದವ್‌ಪುರ್‌ ವಿಶ್ವವಿದ್ಯಾಲಯವು ಭಾರತದಲ್ಲಿನ ಒಂದು "ಪಂಚ ತಾರಾ ವಿಶ್ವವಿದ್ಯಾಲಯ" ಎಂಬ ಶ್ರೇಯಾಂಕ ಅಥವಾ ಶ್ರೇಣಿಯನ್ನು ನ್ಯಾಷನಲ್‌ ಅಸೆಸ್‌ಮೆಂಟ್‌ ಅಂಡ್‌ ಅಕ್ರೆಡಿಷನ್‌ ಕೌನ್ಸಿಲ್‌‌‌‌‌ನಿಂದ ಎರಡು ಸಂದರ್ಭಗಳಲ್ಲಿ ಪಡೆದುಕೊಂಡಿದೆ. == ಇತಿಹಾಸ == ಒಂದು ರಾಷ್ಟ್ರೀಯ ತಳಹದಿಯ ಮೇಲೆ ಸಾಹಿತ್ಯಕ, ವೈಜ್ಞಾನಿಕ ಹಾಗೂ ತಾಂತ್ರಿಕ ಶಿಕ್ಷಣವನ್ನು ನೀಡಲು ರಾಷ್ಟ್ರೀಯ ಶಿಕ್ಷಣ ಮಂಡಳಿಯು (ನ್ಯಾಷನಲ್‌ ಕೌನ್ಸಿಲ್‌ ಆಫ್‌ ಎಜುಕೇಷನ್‌-) 1906ರಲ್ಲಿ ಸ್ಥಾಪಿಸಲ್ಪಟ್ಟಿತು. ಈ ವರ್ಷವು ಬಂಗಾಳದ ಇತಿಹಾಸದಲ್ಲಿ ಮಹತ್ವದ್ದಾಗಿತ್ತು. ಏಕೆಂದರೆ, ಈ ಪ್ರಾಂತವು ಭಾರತದ ಗವರ್ನರ್‌ ಜನರಲ್‌ ಲಾರ್ಡ್‌ ಕರ್ಜನ್‌‌ನಿಂದ ಆಗಷ್ಟೇ ವಿಭಜನೆಗೊಂಡಿತ್ತು. ಇದರ ಪರಿಣಾಮವಾಗಿ ಒಂದೆಡೆಯಲ್ಲಿ ಪೂರ್ವ ಬಂಗಾಳ (ಈ ಪ್ರದೇಶವು ಅಂತಿಮವಾಗಿ 1971ರಲ್ಲಿ ಬಾಂಗ್ಲಾದೇಶವಾಗಿ ಮಾರ್ಪಾಡಾಯಿತು) ಹಾಗೂ ಮತ್ತೊಂದೆಡೆಯಲ್ಲಿ ಪಶ್ಚಿಮ ಬಂಗಾಳ ಹಾಗೂ ಒಡಿಶಾ ರೂಪುಗೊಂಡಿದ್ದವು. 1906ರಲ್ಲಿ, ರವೀಂದ್ರನಾಥ ಟ್ಯಾಗೋರ್‌, ಅರವಿಂದೋ ಘೋಷ್‌, ರಾಜಾ ಸುಬೋಧ್‌ ಚಂದ್ರ ಮಲ್ಲಿಕ್‌ ಹಾಗೂ ಬ್ರಜೇಂದ್ರ ಕಿಶೋರ್‌ ರಾಯ್‌ಚೌಧರಿ ಮೊದಲಾದವರನ್ನು ಒಳಗೊಂಡಂತೆ ಬಂಗಾಳಿ ಬುದ್ಧಿಜೀವಿಗಳ ಒಂದು ಸಮೂಹವು ಬಂಗಾಳದ ವಿಭಜನೆಯನ್ನು ಪ್ರತಿಭಟಿಸಲು ನಿರ್ಧರಿಸಿತು. ಇದಕ್ಕಾಗಿ, 'ರಾಷ್ಟ್ರೀಯ ರೂಪರೇಖೆಗಳ ಮೇಲೆ ಹಾಗೂ ರಾಷ್ಟ್ರೀಯ ನಿಯಂತ್ರಣದ ಅಡಿಯಲ್ಲಿ' ಜನಸಮೂಹಕ್ಕೆ ಶಿಕ್ಷಣವನ್ನು ಒದಗಿಸುವ ಮೂಲಕ ಬ್ರಿಟಿಷ್‌ ಆಳ್ವಿಕೆಗೆ ಸವಾಲೆಸೆಯುವ ಸಂಸ್ಥೆಯೊಂದನ್ನು ಸ್ಥಾಪಿಸಲು ಈ ಬುದ್ಧಿಜೀವಿಗಳು ನಿರ್ಧರಿಸಿದರು. ರಾಶ್‌ಬಿಹಾರಿ ಘೋಷ್‌‌‌ರನ್ನು ತನ್ನ ಮೊದಲ ಅಧ್ಯಕ್ಷರನ್ನಾಗಿ ಹೊಂದುವುದರೊಂದಿಗೆ ಸ್ಥಾಪಿಸಲ್ಪಟ್ಟಿತು. ಹೆಚ್ಚೂಕಮ್ಮಿ ಅದೇ ದಿನದಂದು, ಸೊಸೈಟಿ ಫಾರ್‌ ಪ್ರಮೋಷನ್‌ ಆಫ್‌ ಟೆಕ್ನಿಕಲ್‌ ಎಜುಕೇಷನ್‌ () ಎಂಬ ಎದುರಾಳಿ ಸಂಘಟನೆಯೊಂದು ತಾರಕ್‌ನಾಥ್‌ ಪಾಲಿಟ್‌‌‌‌ರಿಂದ ಬಂಗಾಳದಲ್ಲಿ ಸ್ಥಾಪಿಸಲ್ಪಟ್ಟಿತು; ಮತ್ತು ಇದರಡಿಯಲ್ಲಿ ಬಂಗಾಳ ತಾಂತ್ರಿಕ ಸಂಸ್ಥೆಯು (ಬೆಂಗಾಲ್‌ ಟೆಕ್ನಿಕಲ್‌ ಇನ್‌ಸ್ಟಿಟ್ಯೂಟ್‌) 1906ರ ಜುಲೈ 25ರಂದು ಅಸ್ತಿತ್ವಕ್ಕೆ ಬಂತು. ಈ ಎರಡೂ ಸಂಘಟನೆಗಳು ಕೆಲವೊಂದು ವರ್ಷಗಳವರೆಗೆ ಸೆಣಸಾಡುತ್ತಲೇ ಇದ್ದವು; 1910ರಲ್ಲಿ ಸಂಘಟನೆಯು ಸಂಘಟನೆಯೊಂದಿಗೆ ಸಂಯೋಜಿಸಲ್ಪಟ್ಟಿತು ಮತ್ತು ಬಂಗಾಳ ತಾಂತ್ರಿಕ ಸಂಸ್ಥೆಯು ಇದರ ತೆಕ್ಕೆಗೆ ಸೇರಿಕೊಂಡಿತು. 1921ರಲ್ಲಿ, ರಾಸಾಯನಿಕ ಎಂಜಿನಿಯರಿಂಗ್‌‌‌ನ್ನು ಒಂದು ಶಿಕ್ಷಣ ವಿಷಯವಾಗಿ ಪರಿಚಯಿಸುವಲ್ಲಿ, ಸದರಿ ಸಂಸ್ಥೆಯು ಭಾರತದಲ್ಲೇ ಮೊದಲನೆಯದು ಎನಿಸಿಕೊಂಡಿತು. 1940ರ ವೇಳೆಗೆ, ಕಾರ್ಯತಃ ಒಂದು ಸ್ವತಂತ್ರ ವಿಶ್ವವಿದ್ಯಾಲಯವಾಗಿ ಸಂಸ್ಥೆಯು ಕಾರ್ಯನಿರ್ವಹಿಸುತ್ತಿತ್ತು. 1947ರಲ್ಲಿ ಭಾರತದ ಸ್ವಾತಂತ್ರ್ಯ ಸಿಕ್ಕ ನಂತರ, ಪಶ್ಚಿಮ ಬಂಗಾಳ ರಾಜ್ಯ ಶಾಸನಸಭೆಯು ಭಾರತದ ಸರ್ಕಾರದ ಸಮ್ಮತಿ-ಸಮಾನ ಅಧಿಕಾರದೊಂದಿಗೆ 1955ರ ಜಾದವ್‌ಪುರ ವಿಶ್ವವಿದ್ಯಾಲಯ ಕಾಯಿದೆಯನ್ನು ಕಟ್ಟಳೆಮಾಡಿತು; ಸದರಿ ಸಂಸ್ಥೆಯುನ್ನು ಸಂಪೂರ್ಣ ಸ್ವಾಯತ್ತತೆಯೊಂದಿಗಿನ ಜಾದವ್‌ಪುರ ವಿಶ್ವವಿದ್ಯಾಲಯವಾಗಿ ಪರಿವರ್ತಿಸಲು ಈ ಕ್ರಮವನ್ನು 1955ರ ಡಿಸೆಂಬರ್‌ 24ರಂದು ಕೈಗೊಳ್ಳಲಾಯಿತು. ಅಲ್ಲಿಂದೀಚೆಗೆ ವಿಶ್ವವಿದ್ಯಾಲಯವು ಈ ದಿನಾಂಕವನ್ನು ತನ್ನ ದಿನಚರಿಯಲ್ಲಿ ಘಟಿಕೋತ್ಸವ ದಿನವನ್ನಾಗಿ ಆಚರಿಸಿಕೊಂಡು ಬಂದಿದೆ. == ವಿಶ್ವವಿದ್ಯಾಲಯದ ಲಾಂಛನ == ತಾವರೆ ದಳಗಳಿಂದ ಸುತ್ತುವರೆಯಲ್ಪಟ್ಟಿರುವ ಒಂದು ಮೂರು-ಜ್ವಾಲೆಯ ದೀಪವು ವಿಶ್ವವಿದ್ಯಾಲಯದ ಲಾಂಛನವಾಗಿದೆ. ದೀಪವು ಜ್ಞಾನವನ್ನು ಪ್ರತಿನಿಧಿಸುತ್ತದೆ. ಬೌದ್ಧಿಕ ತರಬೇತಿ, ಭಾವಗಳು ಹಾಗೂ ಕಲ್ಪನಾಶಕ್ತಿಯನ್ನು ಬೆಳೆಸಿಕೊಳ್ಳುವಿಕೆ, ಹಾಗೂ ಆಧ್ಯಾತ್ಮಿಕ ಬೆಳವಣಿಗೆ ಎಂಬ ಮೂರು ಅಂಶಗಳನ್ನು ಮೂರು ಜ್ವಾಲೆಗಳು ಪ್ರತಿನಿಧಿಸುತ್ತವೆ. ಲಲಿತ ಕಲೆಗಳು ಹಾಗೂ ಸಂಸ್ಕೃತಿಯನ್ನು ಪರಿಧಿಯ ಮೇಲಿನ ತಾವರೆಯ ದಳಗಳು ಪ್ರತಿನಿಧಿಸುತ್ತವೆ. ದಿವಂಗತ ನಂದಲಾಲ್‌ ಬೋಸ್‌ ಈ ಲಾಂಛನವನ್ನು ವಿನ್ಯಾಸಗೊಳಿಸಿದರು. ಬಂಗಾಳ ಕಲಾ ಶಾಲೆಯ ಓರ್ವ ಪ್ರಮುಖ ಸದಸ್ಯರಾಗಿದ್ದ ಇವರು, ಶಾಂತಿನಿಕೇತನದಲ್ಲಿದ್ದ ರವೀಂದ್ರನಾಥ ಟ್ಯಾಗೋರ್‌‌‌ರವರ ವಿಶ್ವ-ಭಾರತಿ ವಿಶ್ವವಿದ್ಯಾಲಯದಲ್ಲಿನ ಕಲಾ ಭವನದಲ್ಲಿದ್ದ ಮಹಾನ್‌ ಆಚಾರ್ಯರ ಪೈಕಿಯೂ ಒಬ್ಬರಾಗಿದ್ದರು. 2005ರ ಡಿಸೆಂಬರ್‌ 24ರಂದು ವಿಶ್ವವಿದ್ಯಾಲಯವು ತನ್ನ ಸುವರ್ಣ ಮಹೋತ್ಸವವನ್ನು ಆಚರಿಸಿಕೊಳ್ಳುತ್ತಿದ್ದಂತೆ, ಈ ಸಂದರ್ಭವನ್ನು ನೆನಪಿಸಿಕೊಳ್ಳಲು ಒಂದು ವಿಶೇಷ ಲಾಂಛನವನ್ನು (ಮೇಲೆ ನೋಡಿ) ಸೃಷ್ಟಿಸಲಾಯಿತು, ಹಾಗೂ 'ಅರಿಯುವುದು ಬೆಳೆಯಲಿಕ್ಕೆ' ಎಂಬ ಧ್ಯೇಯವಾಕ್ಯವನ್ನು ರೂಪಿಸಲಾಯಿತು. ಈ ದಿನಾಂಕವು ರಾಷ್ಟ್ರೀಯ ಶಿಕ್ಷಣ ಮಂಡಳಿ ಶತಮಾನೋತ್ಸವದ ದಿನಾಂಕವೂ ಆಗಿತ್ತು. == ಶೈಕ್ಷಣಿಕ ಆವರಣ == ನಗರ ಪ್ರದೇಶದಲ್ಲಿರುವ ಎರಡು ಶೈಕ್ಷಣಿಕ ಆವರಣಗಳ ನೆರವಿನೊಂದಿಗೆ ಜಾದವ್‌ಪುರ ವಿಶ್ವವಿದ್ಯಾಲಯವು ಕಾರ್ಯನಿರ್ವಹಿಸುತ್ತಿದ್ದು, ಇವುಗಳಲ್ಲಿ ಒಂದು ಜಾದವ್‌ಪುರದಲ್ಲಿ (58 ಎಕರೆಗಳು) ಇದ್ದರೆ, ಮತ್ತೊಂದು ಸಾಲ್ಟ್‌ ಲೇಕ್‌ನಲ್ಲಿದೆ (26 ಎಕರೆಗಳು). ಜಾದವ್‌ಪುರದಲ್ಲಿ ನೆಲೆಗೊಂಡಿರುವ ಒಂದು ಬಳಕೆಯಲ್ಲಿಲ್ಲದ ಆಗಿರುವ ನ್ಯಾಷನಲ್‌ ಇನ್‌ಸ್ಟ್ರುಮೆಂಟ್ಸ್‌‌ನ್ನು ಇದು ಇತ್ತೀಚೆಗಷ್ಟೇ ತನ್ನ ಸ್ವಾಧೀನಕ್ಕೆ ತೆಗೆದುಕೊಂಡಿದ್ದು, ತನ್ಮೂಲಕ ಈ ಕ್ರಮವನ್ನು ಕೈಗೊಳ್ಳುವಲ್ಲಿನ ಮೊದಲ ಭಾರತೀಯ ವಿಶ್ವವಿದ್ಯಾಲಯ ಎನಿಸಿಕೊಂಡಿದೆ. ಜಾದವ್‌ಪುರದಲ್ಲಿನ ಪ್ರಮುಖ ಶೈಕ್ಷಣಿಕ ಆವರಣವು ಎಂಜಿನಿಯರಿಂಗ್‌, ವಿಜ್ಞಾನ ಹಾಗೂ ಕಲಾವಿಭಾಗದಂಥ ಮೂರು ಶಾಖೆಗಳ ಬಹುಪಾಲು ವಿಭಾಗಗಳನ್ನು ಒಳಗೊಂಡಿದೆ; ಇದರ ಜೊತೆಗೆ ಜಾದವ್‌ಪುರ ವಿಶ್ವವಿದ್ಯಾಲಯದ ಕೇಂದ್ರ ಗ್ರಂಥಾಲಯ ಹಾಗೂ ಬ್ಲ್ಯೂ ಅರ್ತ್‌ ವರ್ಕ್‌ಷಾಪ್‌ ಕೂಡಾ ಇಲ್ಲಿ ನೆಲೆಗೊಂಡಿವೆ. ಸಾಲ್ಟ್‌ ಲೇಕ್‌ ಶೈಕ್ಷಣಿಕ ಆವರಣದ ವತಿಯಿಂದ ಐದು ಎಂಜಿನಿಯರಿಂಗ್‌ ವಿಭಾಗಗಳು ನಿರ್ವಹಿಸಲ್ಪಡುತ್ತವೆ. ಸಾಲ್ಟ್‌ ಲೇಕ್‌ ಶೈಕ್ಷಣಿಕ ಆವರಣದಲ್ಲಿನ ಪ್ರಮುಖ ಮೈದಾನವನ್ನು ಬಂಗಾಳದ ಕ್ರಿಕೆಟ್‌ ಅಸೋಸಿಯೇಷನ್‌ಗೆ ಗುತ್ತಿಗೆಯ ಆಧಾರದ ಮೇಲೆ ನೀಡಲಾಗಿದೆ ಮತ್ತು ಹಲವಾರು ಅಂತರರಾಜ್ಯ ಹಾಗೂ ಅಂತಃ-ರಾಜ್ಯ ಕ್ರಿಕೆಟ್‌ ಪಂದ್ಯಗಳು ಅನೇಕವೇಳೆ ಇಲ್ಲಿ ಆಯೋಜಿಸಲ್ಪಡುತ್ತವೆ. ಹೊಸದಾದ ನ್ಯಾಷನಲ್‌ ಇನ್‌ಸ್ಟ್ರುಮೆಂಟ್ಸ್‌ ಶೈಕ್ಷಣಿಕ ಆವರಣವು ಹೊಸ ಪ್ರಯೋಗಾಲಯಗಳಿಗೆ ಸಂಬಂಧಿಸಿದಂತೆ, ಅದರಲ್ಲೂ ವಿಶೇಷವಾಗಿ ವಿದ್ಯುತ್‌‌, ವಿದ್ಯುನ್ಮಾನ ಮತ್ತು ದೂರಸಂಪರ್ಕ ಹಾಗೂ ಕಂಪ್ಯೂಟರ್‌‌ ಎಂಜಿನಿಯರಿಂಗ್ ಶಾಖೆಗಳ ವಿಭಾಗಗಳಿಗೆ ಸಂಬಂಧಿಸಿದಂತೆ ಹೆಚ್ಚು ಅಗತ್ಯವಾಗಿರುವ ಸ್ಥಳಾವಕಾಶವನ್ನು ಸೇರಿಸಿಕೊಳ್ಳಲಿದೆ ಎಂದು ನಿರೀಕ್ಷಿಸಲಾಗಿದೆ. == ಜಾದವ್‌ಪುರ ವಿಶ್ವವಿದ್ಯಾಲಯದ ಮಾನ್ಯತೆಯನ್ನು ಪಡೆದಿರುವ ವಿಶೇಷಜ್ಞತೆಯ ಶಿಕ್ಷಣ ಸಂಸ್ಥೆಗಳು == ಜಾದವ್‌ಪುರ್‌ ವಿದ್ಯಾಪೀಠ ಕಾಲೇಜ್‌ ಆಫ್‌ ಎಜುಕೇಶನ್‌ ಇನ್‌‌ಸ್ಟಿಟ್ಯೂಟ್‌ ಆಫ್‌ ಬಿಸಿನೆಸ್‌ ಮ್ಯಾನೇಜ್‌ಮೆಂಟ್‌ . . ಬಿರ್ಲಾ ಇನ್‌ಸ್ಟಿಟ್ಯೂಟ್‌ ಮೆರೈನ್‌ ಎಂಜಿನಿಯರಿಂಗ್‌ ಅಂಡ್‌ ರಿಸರ್ಚ್‌ ಇನ್‌ಸ್ಟಿಟ್ಯೂಟ್ (ಇಂಡಿಯನ್‌ ಮೆರಿಟೈಮ್‌ ಯೂನಿವರ್ಸಿಟಿಯೊಂದಿಗೆ ಮರು-ಮಾನ್ಯತೆಯನ್ನು ಹೊಂದಬೇಕಿದೆ) == ಶ್ರೇಣಿಗಳು == IITಗಳನ್ನು ಬಹಿಷ್ಕರಿಸುತ್ತಿರುವ ಬಹುಪಾಲು ಭಾರತೀಯ ಎಂಜಿನಿಯರಿಂಗ್‌ ಕಾಲೇಜುಗಳು ಸ್ನಾತಕಪೂರ್ವ ಬೋಧನೆಯ ಕುರಿತಾಗಿ ಒತ್ತುನೀಡುತ್ತಿದ್ದರೆ, ಜಾದವ್‌ಪುರ ವಿಶ್ವವಿದ್ಯಾಲಯವು ತನ್ನ ಸಂಶೋಧನಾ ಚಟುವಟಿಕೆಗಳಿಗೆ ಸಂಬಂಧಿಸಿದಂತೆ ಭಾರತದಾದ್ಯಂತ ಪ್ರಮುಖವಾಗಿ ಗುರುತಿಸಲ್ಪಟ್ಟಿದೆ; ಭಾರತದೆಲ್ಲೆಡೆಯ ಪರಿಗಣನೆಯಲ್ಲಿ, ತನ್ನ ಎಂಜಿನಿಯರಿಂಗ್‌ಗೆ ಶಾಖೆಗೆ ಮೀಸಲಾದ ಸಂಶೋಧನಾ ಫಲಿತಾಂಶಕ್ಕೆ ಸಂಬಂಧಿಸಿದಂತೆ ಇದು 6ನೇ ಸ್ಥಾನವನ್ನು ಪಡೆದುಕೊಂಡಿದೆ. ಇದಕ್ಕೆ ನೀಡಲಾಗಿರುವ ಇತರ ಕೆಲವೊಂದು ಶ್ರೇಣಿಗಳು ಈ ಕೆಳಗಿನಂತಿವೆ: 2009ರಲ್ಲಿನ ಆಧಾರದ ಮೇಲೆ ಜಾದವ್‌ಪುರ ವಿಶ್ವವಿದ್ಯಾಲಯವು ಭಾರತದಲ್ಲಿ 6ನೇ ಸ್ಥಾನವನ್ನು ಪಡೆದುಕೊಂಡಿದೆ [೧] ಅಥವಾ [೨] 2009ರಲ್ಲಿ ಎಂಜಿನಿಯರಿಂಗ್‌ ಹಾಗೂ ತಂತ್ರಜ್ಞಾನದ ಬೋಧನಾಂಗವು ಭಾರತದಲ್ಲಿ 10ನೇ ಸ್ಥಾನವನ್ನು ಪಡೆದುಕೊಂಡಿತು (ಮಿಂಟ್‌ -ಫೋರ್‌) [೩] 2009ರಲ್ಲಿ ಎಂಜಿನಿಯರಿಂಗ್‌ ಹಾಗೂ ತಂತ್ರಜ್ಞಾನದ ಬೋಧನಾಂಗವು ಭಾರತದಲ್ಲಿ 12ನೇ ಸ್ಥಾನವನ್ನು ಪಡೆದುಕೊಂಡಿತು (ಔಟ್‌ಲುಕ್‌) [೪] ಎಂಜಿನಿಯರಿಂಗ್‌ ಹಾಗೂ ತಂತ್ರಜ್ಞಾನದ ಬೋಧನಾಂಗವು ಭಾರತದಲ್ಲಿ 11ನೇ ಸ್ಥಾನವನ್ನು ಪಡೆದುಕೊಂಡಿತು (ಇಂಡಿಯಾ ಟುಡೆ 2007) [೫] ಕಲಾವಿಭಾಗದ ಬೋಧನಾಂಗವು ಭಾರತದಲ್ಲಿ 29ನೇ ಸ್ಥಾನವನ್ನು ಪಡೆದುಕೊಂಡಿತು (ಇಂಡಿಯಾ ಟುಡೆ 2008) ಎಂಜಿನಿಯರಿಂಗ್‌ ಮತ್ತು ತಂತ್ರಜ್ಞಾನದ ಬೋಧನಾಂಗವು ಭಾರತದಲ್ಲಿ 11ನೇ ಸ್ಥಾನವನ್ನು ಪಡೆದುಕೊಂಡಿತು (ಇಂಡಿಯಾ ಟುಡೆ 2007) [೬] == ಗಮನಾರ್ಹ ಬೋಧಕವರ್ಗ == ತ್ರಿಗುಣಾ ಸೇನ್ (ಯಂತ್ರಶಿಲ್ಪ ಎಂಜಿನಿಯರಿಂಗ್‌) - ಇವರು 'ಜಾದವ್‌ಪುರ ವಿಶ್ವವಿದ್ಯಾಲಯದ ಜನಕ', ವಿಶ್ವವಿದ್ಯಾಲಯದ ಮೊದಲ ಮುಖ್ಯಾಧಿಕಾರಿ ಹಾಗೂ ಉಪ-ಕುಲಪತಿ; ನಂತರದಲ್ಲಿ ಬನಾರಸ್‌ ಹಿಂದೂ ವಿಶ್ವವಿದ್ಯಾಲಯದ ಉಪ-ಕುಲಪತಿ; ರಾಜ್ಯ ಸಭಾ , ಕೇಂದ್ರ ಶಿಕ್ಷಣ ಮಂತ್ರಿ, ಪೆಟ್ರೋಲಿಯಂ, ಕಲ್ಲಿದ್ದಲು ಹಾಗೂ ಖನಿಜಗಳ ಇಲಾಖೆಯ ಕೇಂದ್ರ ಮಂತ್ರಿ; ಪದ್ಮ ಭೂಷಣ ಪ್ರಶಸ್ತಿ ವಿಜೇತ ಅಮರ್ತ್ಯ ಸೇನ್ (ಅರ್ಥಶಾಸ್ತ್ರ) - ಹಿಂದೆ ಕೇಂಬ್ರಿಜ್‌‌ನ ಟ್ರಿನಿಟಿ ಕಾಲೇಜಿನ ಮಾಸ್ಟರ್‌ ಪದವಿಯಲ್ಲಿದ್ದು ಮುಖ್ಯಸ್ಥರೆನಿಸಿಕೊಂಡವರು ಮತ್ತು [[ಆಲ್‌ಫ್ರೆಡ್‌ ನೊಬೆಲ್ ನೆನಪಿನಲ್ಲಿ ಆರ್ಥಿಕ ವಿಜ್ಞಾನಗಳಲ್ಲಿ ನೀಡುವ ದಿ ಬ್ಯಾಂಕ್‌ ಆಫ್‌ ಸ್ವೀಡನ್‌ ಪ್ರಶಸ್ತಿ‌]]ಯ ವಿಜೇತ ಬುದ್ಧದೇವ್‌ ಬಸು (ತುಲನಾತ್ಮಕ ಸಾಹಿತ್ಯ) - ಬಂಗಾಳಿ ಕವಿ, ನಾಟಕಕಾರ, ಕಾದಂಬರಿಕಾರ, ಭಾಷಾಂತರಕಾರ ಹಾಗೂ ಪ್ರಬಂಧಕಾರ, ತುಲನಾತ್ಮಕ ಸಾಹಿತ್ಯದ (ಏಷ್ಯಾದಲ್ಲಿರುವ ಇದೇ ವರ್ಗಕ್ಕೆ ಸೇರಿದವುಗಳಲ್ಲಿ ಮೊದಲಿನದು, ಮತ್ತು ಭಾರತದಲ್ಲಿನ ಏಕೈಕ ಪೂರ್ತಿಯಾಗಿ-ಸ್ಥಾನಮಾನ ಪಡೆದ ವಿಭಾಗ) ವಿಭಾಗದ ಸಂಸ್ಥಾಪಕ, ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ರವೀಂದ್ರ ಪುರಸ್ಕಾರ ಹಾಗೂ ಪದ್ಮ ಭೂಷಣ ಪ್ರಶಸ್ತಿಗಳ ವಿಜೇತ ಡೇವಿಡ್‌ ಮೆಕ್‌ಕಚಿಯಾನ್ (ತುಲನಾತ್ಮಕ ಸಾಹಿತ್ಯ) - ಪ್ರಾಧ್ಯಾಪಕ ಮತ್ತು ನಂತರದಲ್ಲಿ ತುಲನಾತ್ಮಕ ಸಾಹಿತ್ಯದಲ್ಲಿ ಪ್ರವಾಚಕ, ಇಂಗ್ಲಿಷ್‌ನಲ್ಲಿನ ಭಾರತೀಯ ಬರಹಗಾರಿಕೆಯ ಅಧ್ಯಯನದಲ್ಲಿ ಅಗ್ರಗಣ್ಯ‌. ಸುಧೀಂದ್ರನಾಥ ದತ್ತಾ (ತುಲನಾತ್ಮಕ ಸಾಹಿತ್ಯ) - ಶ್ರೇಷ್ಠ ಬಂಗಾಳಿ ಕವಿ, ಭಾಷಾಂತರಕಾರ ಮತ್ತು ವಿದ್ವಾಂಸ ಸುಬೋಧ ಚಂದ್ರ ಸೇನ್‌ ಗುಪ್ತಾ (ಇಂಗ್ಲಿಷ್‌) - ಖ್ಯಾತ ವಿದ್ವಾಂಸ ಹಾಗೂ ವಿಮರ್ಶಕ ಅಲೋಕ್‌ರಂಜನ್‌ ದಾಸ್‌ಗುಪ್ತಾ-[೭] (ತುಲನಾತ್ಮಕ ಸಾಹಿತ್ಯ) - ಕವಿ, ಗೊಯೆಥೆ ಪಾರಿತೋಷಕ, ಸಾಹಿತ್ಯ ಅಕಾಡೆಮಿ ಹಾಗೂ ಆನಂದ ಪುರಸ್ಕಾರ ಮೊದಲಾದ ಪ್ರಶಸ್ತಿಗಳ ವಿಜೇತ ಶಂಖ ಘೋಷ್ (ಬಂಗಾಳಿ) - ಬಂಗಾಳಿ ಕವಿ, ಸಾಹಿತ್ಯ ಅಕಾಡೆಮಿ ಪ್ರಶಸ್ತಿ (ಎರಡು ಬಾರಿ), ರವೀಂದ್ರ ಪುರಸ್ಕಾರ ಹಾಗೂ ದೇಶಿಕೋತ್ತಮ ಪ್ರಶಸ್ತಿಗಳ ವಿಜೇತ. ಸುಕುಮಾರಿ ಭಟ್ಟಾಚಾರ್ಜಿ (ಸಂಸ್ಕೃತ ಮತ್ತು ತುಲನಾತ್ಮಕ ಸಾಹಿತ್ಯ) - ವೈದಿಕ ಸಂಸ್ಕೃತಿ ಮತ್ತು ಹಿಂದೂಧರ್ಮದ ಕುರಿತಾದ ಖ್ಯಾತ ಚರಿತ್ರೆಕಾರ ಹಾಗೂ ವ್ಯಾಖ್ಯಾನಕಾರ ಅಜಿತ್‌ ದತ್ತಾ (ಬಂಗಾಳಿ) - ಬಂಗಾಳಿ ಕವಿ ನವನೀತ ದೇವ ಸೇನ್‌ (ತುಲನಾತ್ಮಕ ಸಾಹಿತ್ಯ) - ಪ್ರವಾಸ ಕಥನಗಳು, ಸಣ್ಣ ಕಥೆಗಳು ಮತ್ತು ಕವಿತೆಗಳ ಲೇಖಕ, ಸಾಹಿತ್ಯ ಅಕಾಡೆಮಿ ಹಾಗೂ ಪದ್ಮಶ್ರೀ ಪ್ರಶಸ್ತಿ ವಿಜೇತ ಮಾನವೇಂದ್ರ ಬಂಡ್ಯೋಪಾಧ್ಯಾಯ (ತುಲನಾತ್ಮಕ ಸಾಹಿತ್ಯ) - ಭಾಷಾಂತರಕಾರ, ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತ ‌ಅಮಿಯಾ ದೇವ್ (ತುಲನಾತ್ಮಕ ಸಾಹಿತ್ಯ) - ವಿದ್ಯಾಸಾಗರ್‌ ವಿಶ್ವವಿದ್ಯಾಲಯದ ಉಪ-ಕುಲಪತಿ ಸ್ವಪನ್‌ ಮಜುಂದಾರ್ (ತುಲನಾತ್ಮಕ ಸಾಹಿತ್ಯ)- ಶಾಂತಿನಿಕೇತನದ ರವೀಂದ್ರ ಭವನದ ಹಿಂದಿನ ನಿರ್ದೇಶಕ ಶಿವಾಜಿ ಬಂಡ್ಯೋಪಾಧ್ಯಾಯ (ತುಲನಾತ್ಮಕ ಸಾಹಿತ್ಯ) - ಬಂಗಾಳಿ ಸಾಹಿತ್ಯದ ಖ್ಯಾತ ವಿಮರ್ಶಕ ಮತ್ತು ಚರಿತ್ರೆಕಾರ ಕೇತಕಿ ಕುಶಾರಿ ಡೈಸಾನ್ (ಇಂಗ್ಲಿಷ್‌) - ವಿದ್ವತ್ಪೂರ್ಣ ಮತ್ತು ಸೃಜನಶೀಲ ಲೇಖಕ, ಆನಂದ ಪುರಸ್ಕಾರ ಪ್ರಶಸ್ತಿ ವಿಜೇತ (ಎರಡು ಬಾರಿ) ಮಾಲಿನಿ ಭಟ್ಟಾಚಾರ್ಯ (ಇಂಗ್ಲಿಷ್‌) - ಸ್ತ್ರೀಸಮಾನತಾವಾದಿ ವಿದ್ವಾಂಸರು ಹಾಗೂ ಸಕ್ರಿಯವಾದಿ, ಹಿಂದಿನ ಲೋಕಸಭಾ , ರಾಷ್ಟ್ರೀಯ ಮಹಿಳಾ ಆಯೋಗದ ಸದಸ್ಯೆ ಸುಕಾಂತ ಚೌಧುರಿ (ಇಂಗ್ಲಿಷ್‌) - ಖ್ಯಾತ ನವೋದಯ ವಿದ್ವಾಂಸ, ಟ್ಯಾಗೋರ್‌ ಸಾಹಿತ್ಯದ ಭಾಷಾಂತರಕಾರ ಸುಪ್ರಿಯಾ ಚೌಧುರಿ (ಇಂಗ್ಲಿಷ್‌) - ಖ್ಯಾತ ನವೋದಯ ವಿದ್ವಾಂಸೆ, ಟ್ಯಾಗೋರ್‌ ಸಾಹಿತ್ಯದ ಭಾಷಾಂತರಗಾರ್ತಿ ಸ್ವಪನ್‌ ಚಕ್ರವರ್ತಿ (ಇಂಗ್ಲಿಷ್‌) - ಭಾರತದ ರಾಷ್ಟ್ರೀಯ ಗ್ರಂಥಾಲಯದ ನಿರ್ದೇಶಕ ಆನಂದ ದೇವ್‌ ಮುಖರ್ಜಿ (ಭೂವಿಜ್ಞಾನ) - ಖ್ಯಾತ ವಿಜ್ಞಾನಿ ಆನಂದ ಲಾಲ್ (ಇಂಗ್ಲಿಷ್‌) - ಟ್ಯಾಗೋರ್‌ ಸಾಹಿತ್ಯದ ಭಾಷಾಂತರಕಾರ ಹಾಗೂ ರಂಗ ವಿಮರ್ಶಕ ಇಂದಿರಾ ಚೌಧುರಿ (ಇಂಗ್ಲಿಷ್‌) - ಸಮಾಲೋಚಕ ಸಕ್ರಿಯವಾದಿ, ಟಾಟಾ ಇನ್‌ಸ್ಟಿಟ್ಯೂಟ್‌ ಆಫ್‌ ಫಂಡಮೆಂಟಲ್‌ ರಿಸರ್ಚ್‌, ಮುಂಬಯಿ; ರವೀಂದ್ರ ಪುರಸ್ಕಾರ ಪ್ರಶಸ್ತಿ ವಿಜೇತೆ ರಿಮಿ . ಚಟರ್ಜಿ (ಇಂಗ್ಲಿಷ್‌) - ಕಾದಂಬರಿಗಾರ್ತಿ ಮತ್ತು ಭಾಷಾಂತರಗಾರ್ತಿ, 2007ರ ವೊಡಾಫೋನ್‌ ಕ್ರಾಸ್‌ವರ್ಡ್‌ ಬುಕ್‌ ಪ್ರಶಸ್ತಿಗಾಗಿ ಅಂತಿಮ ಆಯ್ಕೆಯ ಪಟ್ಟಿಯಲ್ಲಿ ಸೇರಿಸಲ್ಪಟ್ಟಾಕೆ. ಶಂಕರ್‌ ಚಟರ್ಜಿ (ಭೂವಿಜ್ಞಾನ) - ಪ್ರಾಗ್ಜೀವಶಾಸ್ತ್ರಜ್ಞ ಹಾಗೂ ಬಂಗಾಳಿ ಭೂವಿಜ್ಞಾನಿ; ಡೈನೋಸಾರ್‌ ಯುಗದ ಅಂತ್ಯಕ್ಕೆ ಇರುವ ಒಂದು ಭಾರತೀಯ ಕೊಂಡಿಯ ಕುರಿತಾಗಿ ಪ್ರಪಂಚದಾದ್ಯಂತ ಒಂದು ಚರ್ಚೆಯನ್ನು ಹುಟ್ಟುಹಾಕಿದವರು. == ಪ್ರಸಿದ್ಧ ಹಳೆಯ ವಿದ್ಯಾರ್ಥಿಗಳು/ಹಳೆಯ ವಿದ್ಯಾರ್ಥಿನಿಯರು == ಸುಬೀರ್‌ ರಹಾ: ವ್ಯವಹಾರ ಪ್ರಪಂಚದ ಸುಪ್ರಸಿದ್ಧ ಅಗ್ರಗಣ್ಯರಾಗಿದ್ದು, ಭಾರತೀಯ ತೈಲವಲಯದಲ್ಲಿ ನಿರ್ದಿಷ್ಟವಾಗಿ ಹಾಗೂ ಸಾರ್ವಜನಿಕ ವಲಯದಲ್ಲಿ ಸಾಮಾನ್ಯವಾಗಿ ಇವರು ತಮ್ಮದೇ ಆದ ಛಾಪುಮೂಡಿಸಿದರು. ONGCಯ ಹಿಂದಿನ ಸಭಾಪತಿ ಹಾಗೂ MDಯಾಗಿಯೂ ಸೇವೆ ಸಲ್ಲಿಸಿದ್ದಾರೆ. ಕಬೀರ್‌ ಸುಮನ್‌ (ಸುಮನ್‌ ಚಟ್ಟೋಪಾಧ್ಯಾಯ ಎಂಬುದು ಹಿಂದಿನ ಹೆಸರು) ಪಥ-ಭೇದಕ ಬಂಗಾಳಿ ಗಾಯಕ-ಸಂಯೋಜಕ-ಗೀತ ರಚನೆಕಾರ, ಲೋಕಸಭೆಯಲ್ಲಿ ತೃಣಮೂಲ ಕಾಂಗ್ರೆಸ್‌ . ರಿತುಪರ್ಣೋ ಘೋಷ್: ಅನೇಕ ರಾಷ್ಟ್ರೀಯ ಪ್ರಶಸ್ತಿ ವಿಜೇತ ಚಲನಚಿತ್ರಗಳ ನಿರ್ದೇಶಕ, ಸಂಭಾಷಣೆ- ಹಾಗೂ ಚಿತ್ರಕಥೆ-ಬರಹಗಾರ. ಮೌಸಮಿ ಭೌಮಿಕ್: ಬಂಗಾಳಿ ಗಾಯಕಿ-ಸಂಯೋಜಕಿ-ಗೀತ ರಚನೆಗಾರ್ತಿ ಮತ್ತು ಜನಾಂಗ-ಸಂಗೀತಶಾಸ್ತ್ರಜ್ಞೆ. ಸೋಹಿನಿ ಹಲಧರ್: ಬಂಗಾಳಿ ರಂಗಭೂಮಿಯ ಅಗ್ರಗಣ್ಯ ನಟಿ ಹಾಗೂ ರಾಷ್ಟ್ರೀಯ ಪ್ರಶಸ್ತಿ ವಿಜೇತ ಚಲನಚಿತ್ರ ನಟಿ. ಪರಮಿತಾ ಮೊಂಡಾಲ್‌: USAಯ ಅರ್ಬನಾ-ಕ್ಯಾಂಪೇನ್‌ನಲ್ಲಿರುವ ಇಲಿನಾಯ್ಸ್‌ ವಿಶ್ವವಿದ್ಯಾಲಯದಲ್ಲಿ ಸಹಾಯಕ ಪ್ರಾಧ್ಯಾಪಕಿ. ಕುನಾಲ್‌ ಬಸು: ಕಾದಂಬರಿಕಾರ ಮತ್ತು ಸೈಯಿದ್‌ ಬಿಸಿನೆಸ್‌ ಸ್ಕೂಲ್‌‌ನಲ್ಲಿ ಪ್ರಾಧ್ಯಾಪಕ. ಸಿದ್ಧಾರ್ಥ ದತ್ತಾ: ಬದಲಿ ಉಪ-ಕುಲಪತಿ, ಜಾದವ್‌ಪುರ್‌ ವಿಶ್ವವಿದ್ಯಾಲಯ. ಚಿರಂಜೀವ್‌ ಭಟ್ಟಾಚಾರ್ಜೀ: ರಾಸಾಯನಿಕ ಎಂಜಿನಿಯರಿಂಗ್‌ನ ಪ್ರಾಧ್ಯಾಪಕ, ಜಾದವ್‌ಪುರ್‌ ವಿಶ್ವವಿದ್ಯಾಲಯ. ‌‌ದೇಬಶಿಶ್‌ ಸರ್ಕಾರ್: ಉಪನ್ಯಾಸಕ, ರಾಸಾಯನಿಕ ಎಂಜಿನಿಯರಿಂಗ್‌ ವಿಭಾಗ, ಕಲ್ಕತ್ತಾ ವಿಶ್ವವಿದ್ಯಾಲಯ. == ಇವನ್ನೂ ನೋಡಿ == ಭಾರತದಲ್ಲಿನ ವಿಶ್ವವಿದ್ಯಾಲಯಗಳ ಪಟ್ಟಿ ಭಾರತದಲ್ಲಿನ ವಿಶ್ವವಿದ್ಯಾಲಯಗಳು ಮತ್ತು ಕಾಲೇಜುಗಳು ಭಾರತದಲ್ಲಿನ ಶಿಕ್ಷಣ ದೂರ ಶಿಕ್ಷಣ ಪರಿಷತ್ತು ವಿಶ್ವವಿದ್ಯಾಲಯ ಧನಸಹಾಯ ಆಯೋಗ (ಭಾರತ) ಇನ್‌‌ಸ್ಟಿಟ್ಯೂಟ್‌ ಆಫ್‌ ಬಿಸಿನೆಸ್‌ ಮ್ಯಾನೇಜ್‌ಮೆಂಟ್‌, ಜಾದವ್‌ಪುರ್‌ ವಿಶ್ವವಿದ್ಯಾಲಯ == ಆಕರಗಳು == == ಬಾಹ್ಯ ಕೊಂಡಿಗಳು == ಜಾದವ್‌ಪುರ್‌ ವಿಶ್ವವಿದ್ಯಾಲಯ 2007-03-04 ವೇಬ್ಯಾಕ್ ಮೆಷಿನ್ ನಲ್ಲಿ. - ಅಧಿಕೃತ ವೆಬ್‌ಸೈಟ್‌ ಜಾದವ್‌ಪುರ್‌ ಯೂನಿವರ್ಸಿಟಿ ಅಲ್ಯುಮಿನಿ ನೆಟ್‌ವರ್ಕ್‌ 2010-04-20 ವೇಬ್ಯಾಕ್ ಮೆಷಿನ್ ನಲ್ಲಿ. - ಅಲ್ಯುಮಿನಿ ದಿ ಎಂಜಿನಿಯರಿಂಗ್‌ ಕಲ್‌ಫೆಸ್ಟ್‌ ಸಂಸ್ಕೃತಿ ಅಫಿಷಿಯಲ್‌ ಸೈಟ್‌ 2006-03-03 ವೇಬ್ಯಾಕ್ ಮೆಷಿನ್ ನಲ್ಲಿ. ಜಾದವ್‌ಪುರ್‌ ಯೂನಿವರ್ಸಿಟಿ ಗ್ಲೋಬಲ್‌ ಅಲ್ಯುಮಿನಿ ಅಸೋಸಿಯೇಷನ್‌ 2014-12-17 ವೇಬ್ಯಾಕ್ ಮೆಷಿನ್ ನಲ್ಲಿ. ಜಾದವ್‌ಪುರ್‌ ಯೂನಿವರ್ಸಿಟಿ ವಿಕಿವರ್ಸಿಟಿ ಪೇಜ್‌ 2010-05-03 ವೇಬ್ಯಾಕ್ ಮೆಷಿನ್ ನಲ್ಲಿ. ಸೃಜನ್‌‌ 2010-07-06 ವೇಬ್ಯಾಕ್ ಮೆಷಿನ್ ನಲ್ಲಿ. - ಆನ್ಯುಯಲ್‌ ಟೆಕ್ನೋ-ಮ್ಯಾನೇಜ್‌ಮೆಂಟ್‌ ಫೆಸ್ಟ್ ಎಡುಕ್ಯಾಟಿ